ಮಾಗಿ

ಮುತ್ತಿನ ಹನಿಯ ಮಂಜು
ಮರ್ಮರದ ಗಾಳಿ ಬೀಸಿ
ಚಳಿಗಾಲದ ನೀಲ ಆಕಾಶ ಖಾಲಿ
ಒಡಲೊಳಗಿನ ಏಕಾಂತದ ಮೌನಕೆ
ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ.

ಕವಿತೆ ಹಾಡುವದಿಲ್ಲ. ಆಕಾಶದ
ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ
ಹೊತ್ತ ಕಂಬಳಿಯಡಿ ಹೊರಳಾಡಿವೆ
ಈ ನೆಲದ ಹಂಗು ಹಾಗೂ ನಿನ್ನ ನೆನಪು
ಚಳಿ ಎಲ್ಲವನ್ನೂ ಮುಕ್ಕಿಬಿಟ್ಟಿದೆ ಹಲ್ಲು ಕಟಗರಿಸುತ್ತ.

ಮಾತನಾಡುವರಿಲ್ಲ ಎದೆ ತೆರೆದು
ಇನ್ನೂ ಪ್ರಿಯವಾಗುವ ಸಂಗತಿಗಳಿಗಾಗಿ
ವರ್ತಮಾನದ ಹೇಳಿಕೆ ಯಾರಿಗೂ ಹಿತ
ಕೊಡುವದಿಲ್ಲ. ಎಲ್ಲರೂ ಅವರವರ
ನಿಲ್ದಾಣದಲಿ ಸುಮ್ಮನೆ ಇಳಿದು ಹೋಗಿದ್ದಾರೆ.

ಗಾಳಿಗೆ ನಿಲ್ಲಲು ಬರುವದಿಲ್ಲ ಚಳಿ
ನರನರಗಳಲಿ ಇಳಿದು ಕಂಪನ
ಸಹ್ಯ ಎಲ್ಲವೂ ಅಸಹ್ಯ ಎಲ್ಲೆಡೆ ಶೀತಲನೋಟ
ಶೂಲ ಶಿಲುಬೆಗೇರಿಸಿದ ತಾತ್ವಿಕ ನಿಲುವು
ಸರಿ ಎನಿಸುವದಿಲ್ಲ ಈ ಮಾಗಿಯ ಚಳಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಉಷಾ ಸ್ವಪ್ನ
Next post ದೀಪಾವಳಿ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys